ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್ಎಸ್ಎಸ್ ವಿರುದ್ಧ ಎಚ್ಡಿಕೆ ಆರೋಪ | ಜನತಾ ನ್ಯೂಸ್
ರಾಮನಗರ : 40 ವರ್ಷದ ಹಿಂದಿನ ಆರ್.ಎಸ್.ಎಸ್. ಬೇರೆ, ಇವತ್ತಿನ ಆರ್.ಎಸ್.ಎಸ್. ಬೇರೆ ಎಂದಿರುವ ಅವರು, ರಾಮನ ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಇಂದು ರಾಮನಗರದಲ್ಲಿ ಮಾತನಾಡಿದ ಎಚ್ಡಿಕೆ, ಎಲ್ಲ ಯೂನಿವರ್ಸಿಟಿಗಳ ಸಿಂಡಿಕೇಟುಗಳಲ್ಲಿ ಆರೆಸ್ಸೆಸ್ನ ಕಾರ್ಯಕರ್ತರನ್ನ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಯೂನಿವರ್ಸಿಟಿಯಲ್ಲಿ ಕೆಲಸ ಆಗ್ಬೇಕಂದ್ರೆ ಸಿಂಡಿಕೇಟ್ ಸದಸ್ಯರು ಲಕ್ಷ ಲಕ್ಷ ಹಣ ಕೇಳುತ್ತಾರೆ ಎಂದರು.
ವಿಜಯದಶಮಿಯ ದಿನದಂದು ಆರ್.ಎಸ್.ಎಸ್.ನ ಭಾಗವತ್ ಅವರು ಒಂದು ಹೇಳಿಕೆ ನೀಡಿದ್ದಾರೆ. ಎಲ್ಲ ಹಿಂದೂ ದೇವಸ್ಥಾನಗಳನ್ನು ಆರ್.ಎಸ್.ಎಸ್. ಸುಪರ್ದಿಗೆ ನೀಡಿ ಅಂತ. ಹಿಂದೂ ದೇವಾಲಯಗಳನ್ನ ಆರ್.ಎಸ್.ಎಸ್.ನವರು ಗುತ್ತಿಗೆ ಹಾಕಿಕೊಂಡಿದ್ದಾರಾ?
1989 - 1991 ರವರೆಗೆ ಅಡ್ವಾನಿಯವರು ರಥಯಾತ್ರೆ ಮಾಡಿದಿರಲ್ಲ, ಇಟ್ಟಿಗೆ, ಹಣ ಸಂಗ್ರಹ ಮಾಡಿದ್ರಲ್ಲ. ಅದರ ಬಗ್ಗೆ ಮಾಹಿತಿ ಎಲ್ಲಿದೆ? ಅವರು ಸಂಗ್ರಹಿಸಿದ ಹಣ ಎಷ್ಟು, ಅದಕ್ಕಾದ ಬಡ್ಡಿ ಎಷ್ಟು? ಎಲ್ಲಿದೆ ಆ ಹಣ. ಈಗ ಸಹ ರಾಮಮಂದಿರ ನಿರ್ಮಾಣಕ್ಕೆ ಜನರಿಂದ ಹಣ ಸಂಗ್ರಹ ಮಾಡಿದ್ದಾರೆ. ಅದರ ಲೆಕ್ಕ ಎಲ್ಲಿದೆ? ಎಂದು ಪ್ರಶ್ನಿಸಿದ್ದರು.
ರಾಮಮಂದಿರ ನಿರ್ಮಾಣದ ಹಣದ ವಿಚಾರದಲ್ಲಿ 200% ಲೋಪ ಆಗಿದೆ. ರಾಮನ ಹೆಸರಿನಲ್ಲಿ ಆಗಿರುವ ದುರುಪಯೋಗದ ಬಗ್ಗೆ ನಾನು ಹೇಳಿದ್ದೇನೆ. ನೀವ್ಯಾರು ಕೇಳೋಕೆ ಎಂದು ಅವರು ನನ್ನನ್ನು ಕೇಳಬಹುದು ಆದರೆ ರಾಮನ ಹೆಸರಿನಲ್ಲಿ ದುರುಪಯೋಗ ಆಗಿರುವುದಂತೂ ಹೌದು ಎಂದು ಗಂಭೀರ ಆರೋಪ ಮಾಡಿದ್ದರು.